ಶಿವಮೊಗ್ಗ, ಮೇ.31 : ಕೇಂದ್ರ ಸರ್ಕಾರವು ಎಕರೆಗೆ 30 ಕ್ವಿಂಟಾಲ್ ಹಾಗೂ ಪ್ರತಿ ರೈತರಿಂದ ಗರಿಷ್ಠ 60 ಕ್ವಿಂಟಾಲ್ ಪ್ರಮಾಣದ ಎಫ್.ಎ.ಕ್ಯೂ ಗುಣಮಟ್ಟದ ಹಸಿಶುಂಠಿಯನ್ನು ಕ್ವಿಂಟಾಲ್ಗೆ ರೂ. 2,445/-ರಂತೆ ಬೆಲೆಯಲ್ಲಿ ಖರೀದಿಸುತ್ತಿದ್ದು, ರಾಜ್ಯ ಸರ್ಕಾರವು ಹಸಿಶುಂಠಿ ಖರೀದಿಸಲು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ಇವರನ್ನು ಖರೀದಿ ಸಂಸ್ಥೆಯನ್ನಾಗಿ ನೇಮಕ ಮಾಡಿದೆ.
ಶಿವಮೊಗ್ಗ ತಾಲೂಕಿಗೆ ಸಂಬoಧಿಸಿದoತೆ ಆಯನೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಖರೀದಿ ಕೇಂದ್ರವನ್ನಾಗಿ ನೇಮಿಸಿದ್ದು, ಸಂಪರ್ಕ ದೂ.ಸಂ.: 9880525117 ಆಗಿದೆ. ರೈತರು ಜೂ.26ರೊಳಗಾಗಿ ನೋಂದಾಯಿಸಿಕೊoಡು ಖರೀದಿ ಪ್ರಕ್ರಿಯೆ ಮಾಡಿಕೊಳ್ಳುವಂತೆ ಎಪಿಎಂಸಿ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
