ಜಿಲ್ಲಾಪಂಚಾಯತ್ ಹಾಗು  ಏನ್.ಆರ್.ಎಲ್. ಎಮ್ ದಿಂದ ನಿಯೋಜನೆಗೊಳಿಸಿದ, ಹೈದರಾಬಾದಿನ ಮ್ಯಾನೇಜ್ ಸಂಸ್ಥೆಯ ಪ್ರಾಯೋಜಿತ ಎರಡನೇ ಬ್ಯಾಚ್ಚಿನ  ಗ್ರಾಮೀಣ ಭಾಗಗಳಲ್ಲಿ ಕೃಷಿಕರ ಏಳ್ಗೆಗಾಗಿ ಶ್ರಮಿಸುವ ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ “ಕೃಷಿ ಸಖಿ”ಯರಿಗೆ “ನೈಸರ್ಗಿಕ ಕೃಷಿಯ” ಬಗ್ಗೆ 5 ದಿನಗಳ ಸಾಮರ್ಥ್ಯ ಅಭಿವೃದ್ಧಿ ತರಬೇತಿಯ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಕೃಷಿ ವಿಜ್ಞಾನ ಕೇಂದ್ರ, ನವಿಲೆಯಲ್ಲಿ ಆಯೋಜಿಸಲಾಗಿತ್ತು.

ಕೆ.ವಿ.ಕೆ ಯ ಮುಖ್ಯಸ್ಥರಾದ ಡಾ. ಗಿರಿಜೇಶ್, ಜಿ.ಕೆ. ರವರು ನೈಸಗಿಕ ಕೃಷಿಯ ಪ್ರಾಮುಖ್ಯತೆ, ಅವಶ್ಯಕತೆ ಹಾಗು ರೈತರಿಗೆ ಅದರಿಂದಾಗುವ ಉಪಯೋಗಗಳು, ತರಬೇತಿಯಲ್ಲಿ ಶಿಭಿರಾರ್ಥಿಗಳಿಗೆ ಕಲಿಸುವಂತಹ ವಿಷಯಗಳ ಬಗ್ಗೆ ತಿಳಿಸಿದರು.

ಸದರಿ ಕಾರ್ಯಕ್ರಮವನ್ನು ಕೆಳದಿ ಶಿವಪ್ಪ ನಾಯಕ ಕೃಷಿ  ಹಾಗು  ತೋಟಗಾರಿಕಾ  ವಿಶ್ವವಿದ್ಯಾಲಯ, ಶಿವಮೊಗ್ಗದ ಕೃಷಿ ವಿಸ್ತರಣಾ ನಿರ್ದೇಶಕರಾದ ಡಾ. ಕೆ.ಟಿ. ಗುರುಮೂರ್ತಿ ರವರು ಉದ್ಘಾಟಿಸಿ ನೈಸರ್ಗಿಕ ಕೃಷಿಯು ಕಡಿಮೆ-ವೆಚ್ಚದ ಕೃಷಿಯಿಂದ ಸುಸ್ಥಿರತೆಯೆಡೆಗೆ ರೈತರನ್ನು ಉತ್ತೇಜಿಸುವುದರೊಂದಿಗೆ, ರಾಸಾಯನಿಕ ಗೊಬ್ಬರಗಳು ಮತ್ತು ಕೈಗಾರಿಕಾ ಕೀಟನಾಶಕಗಳ ಬಳಕೆಯನ್ನು ತೊಡೆದುಹಾಕುತ್ತದೆ. ನೈಸರ್ಗಿಕ ಬೇಸಾಯವು ಮಣ್ಣಿನ ಫಲವತ್ತತೆ ಮತ್ತು ಬಲವನ್ನು ಸುಧಾರಿಸುವ ಮೂಲಕ ಹವಾಮಾನ ವೈಪರೀತ್ಯದ ವಿರುದ್ಧ ಬೆಳೆಗಳನ್ನು ರಕ್ಷಿಸುತ್ತದೆಯೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದಂತಹ  ಕೃಷಿ ಮಹಾವಿದ್ಯಾಲಯದ ಡೀನ್ ಹಾಗು  ಆವರಣದ ಮುಖ್ಯಸ್ಥರಾದ ಡಾ. ಗಣೇಶ್ ನಾಯಕ್ ರವರು ನೈಸರ್ಗಿಕ ಕೃಷಿಯಲ್ಲಿ ಮುಖ್ಯವಾಗಿ ಬೇವು, ಗೋಮೂತ್ರ, ಹುದುಗಿಸಿದ ಮೊಸರು, ನೀರು, ದಶಪರ್ಣಿ ಇತ್ಯಾದಿಗಳ ಸಾರ, ಬೇವು-ಗೋಮೂತ್ರದ ಸಾರ, ಮಿಶ್ರ ಎಲೆಗಳ ಸಾರ ಮತ್ತು ಮೆಣಸಿನಕಾಯಿ-ಬೆಳ್ಳುಳ್ಳಿ ಸಾರ ಇತ್ಯಾದಿಗಳನ್ನು ಸ್ವಾಭಾವಿಕವಾಗಿ ಕೀಟಗಳ ನಿರ್ವಹಣೆಯಲ್ಲಿ ಕಡಿಮೆ ಖರ್ಚಿನಲ್ಲಿ ರೈತರೇ ತಯಾರಿಸಬಹುದೆಂದು ತಿಳಿಸಿದರು.

ಸಹ ವಿಸ್ತರಣಾ ನಿರ್ದೇಶಕರಾದ ಡಾ. ಹನುಮಂತಸ್ವಾಮಿ ಯವರು ಮನೆಯಲ್ಲಿಯೇ ಸುಲಭಾವಾಗಿ ತಯಾರಿಸಬಹುದಾದಂತಹ ಜೈವಿಕ ಕೀಟ ನಿರ್ವಾಹಕಗಳ ಬಗ್ಗೆ ಮಾಹಿತಿ ನೀಡಿದರು.  ಕಾರ್ಯಕ್ರಮದ ಆಯೋಜಕರು ಹಾಗು ನೋಡಲ್ ಅಧಿಕಾರಿಯಾದ ಡಾ. ಏನ್. ಸುಧಾರಾಣಿ ಯವರು ನೆರೆದಿದ್ದ ಸಭಿಕರೆಲ್ಲರನ್ನು ವಂದಿಸಿದರು ಮತ್ತು ಕಾರ್ಯಕ್ರಮದ ಸಹ ಸಂಯೊಜಕರಾದ ಡಾ. ಭರತ್ ಕುಮಾರ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.

error: Content is protected !!