ಶಿವಮೊಗ್ಗ ಮೇ.2 ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ವತಿಯಿಂದ ಕಾರ್ಮಿಕ ದಿನಾಚರಣೆ ಪ್ರಯುಕ್ತ ಮೇ ೧ ರಂದು ಹೋಟೆಲ್ ಶುಭಂ ನಲ್ಲಿನ ಕಾರ್ಮಿಕರಿಗೆ ಮತದಾನ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.

ಕಾರ್ಮಿಕರಿಗೆ ಮ್ಯೂಸಿಕಲ್ ಛೇರ್ ಕ್ರೀಡೆ ಮೂಲಕ ಮತದಾನ ಜಾಗೃತಿ ಮೂಡಿಸಿದರು.ಈ ವೇಳೆ ಮತದಾನ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಶುಭಂ ಹೋಟೆಲ್ ಮಾಲೀಕರಾದ ಉದಯ್ ಕುಮಾರ್ ಮಾತನಾಡಿ, ಮೇ 07 ರಂದು 12 ಗಂಟೆ ಗೆ ಮುಂಚಿತವಾಗಿ ಮತ ಚಲಾಯಿಸಿ ನಮ್ಮ ಹೋಟೆಲ್ ಗೆ ಬಂದವರಿಗೆ ಬೆಳಗಿನ ತಿಂಡಿ ಯನ್ನು ಉಚಿತವಾಗಿ ನೀಡಲಾಗುವುದು ಎಂದು ತಿಳಿಸಿದರು.

ಈ ಕಾರ್ಯಕ್ರಮಸಮಹಾನಗರ ಪಾಲಿಕೆಯ ಸ್ವೀಪ್ ನೋಡಲ್ ಅಧಿಕಾರಿಗಳಾದ ಅನುಪಮಾ ,ಸುಪ್ರಿಯಾ,ಸ್ವೀಪ್ ತಂಡದ ಅಧಿಕಾರಿಗಳು,ಸಿಬ್ಬಂದಿಗಳು ಉಪಸ್ಥಿತರಿದ್ದರು.

error: Content is protected !!